ನೆಗಿಲ ಹೇಗಲೆರಿಸಿ ದನಗಳೊಡನೆ ಹೊರಡುತ್ತಾನೆ,ಬೆಳ್ಳಬೆಳ್ಳಿಗ್ಗೆ ಈ ಸಲ ಸಾಗುವಳಿ ಚಂದಾಗಾಯ್ತದೆ, ಮೊಡ ಕಾಣ್ತಾವೆ ಮಳೆ ಬಂದರು ಬರಬಹ್ದು. ನಮ್ಮ ಐನೊರು ಹೇಳದ್ರು ಈ ವರ್ಸ ಒಳ್ಳೆ ಮಳೆ ಆಯ್ತದೆ ಮಾರ, ನನ್ಗೂ ಹೊದಸಲದ ಬಾಗಿ ದವಸ ಕೊಡ್ತಿಯಾ ಬಿಡು…… ಅದೆ ಗುನುಗಿನಲ್ಲಿ ಆಕಾಶವನ್ನೆ ಬಿಟ್ಟ ಕಣ್ಣು ಬಿಟ್ಟ ಹಾಗೆ ನೊಡುತ್ತಾ ,ಆ ಮೊಡಗಳ ಅಲೆದಾಟ ಕಣ್ಣುಗಳನ್ನ ರಾಚುತ್ತಿವೆ. ಈ ವರ್ಸನಾದ್ರು ಒಳ್ಳೆ ಮಳೆ ಬಿಳ್ಸು ಮಳೆರಾಯ ಒಂದಷ್ಟು ಬೆಳ್ಕೊತ್ತಿವಿ, ದನಗಳು ಸೊಂಪಾಗಿ ಮೆಯೊ ಹುಲ್ಲು ಸಿಕ್ಕುತ್ತೆ ಅನ್ನುತ್ತಾ ಹೆಜ್ಜೆಹಾಕುತ್ತಾ ಹೊಲದ ಕಡೆ ಹೊರಟ.
ಸುತ್ತ ಮುತ್ತಲೆಲ್ಲ ಬಿರುಕು ಬಿಟ್ಟ ನೆಲ, ಕೆಂಚಯ್ಯನ ಹೊಲದ ಬದುವಿನ ಮೇಲಿನ ಹಲಸಿನ ಮರ , ಆ ಬಯಲಿಗೆಲ್ಲ ಕಾಣುತ್ತಿದ್ದ ಹಸಿರು ಹೊದ್ದ ಒಂದೆ ಜೀವ . ಮರುಳುಗಾಡಿನಲ್ಲಿ ಓಯಸಸ್ ಇದ್ದ ಹಾಗೆ ಎಲ್ಲವನ್ನು ಎದುರಿಸಿ ನಿಂತಿದೆ.
ಮುಂದೆ ಸಾಗಿ ತನ್ನ ಹೊಲವನ್ನು ಕಂಡು ಒಂದು ನಿಟ್ಟುಸಿರು ಬಿಟ್ಟು ,ಹೆಗಲ ಮೇಲಿನ ಭಾರವನ್ನು ಇಳಿಸಿ, ಎಲ್ಲಿಂದ ಶುರು ಮಾಡೊದು ಉಳುಮೆ ….ಭೂಮಿ ಬಾಯಿ ಬಿಟ್ಟು ಬರಡಾಗಿದೆ.
ಹೊದ ವರುಸ ಕೂಡ ಸರಿಯಾಗಿ ಮಳೆ ಇಲ್ಲ,ಉಳುಮೆ ಮಾಡಕ್ಕು ಆಗಲಿಲ್ಲ ವಲ್ಲ ಅಂತ ನೆನಪಾಯಿತು .ನೆಗಿಲ ಹೂಡಿ ಉಳೊಕ್ಕು ಬಯವಾಗುತ್ತೆ ಒಂದು ಗೇಣು ಮಣ್ಣು ಕದಲಿಸಕ್ಕು ತ್ರಾಣವಿಲ್ಲ ಈ ಎತ್ತುಗಳಿಗೆ , ಮೇವಿಲ್ಲದೆ ಬರಡಾದ ಜೀವಗಳನ್ನ ಹ್ಯಾಗೆ ಕಟ್ಟೊದು.
ಕಣ್ಣಲ್ಲಿ ಬರುವ ಹನಿಗಳು ಒಂದೊಂದೆ ನೆಲವ ಸೊಕಿ ಮರೆಯಾಗಿತ್ತಿವೆ…. ಅಬ್ಬಾ!!! ಎಂಥಾ ಕಾಲ ಬಂತು ಈ ಮೈಯಿಂದ ಬೆವರ ಹನಿ ಹರಿಸಬೇಕಾದ ಜೀವಕ್ಕೆ ಎಂಥಾ ಗತಿ ಬಂತು. ಈ ಭೂತಾಯ ನಂಬಿದ ನಮ್ಮಪ್ಪ ,ಅವನಪ್ಪ ಯಾವತ್ತು ಈ ಬದುಕು ಕಂಡಿಲ್ಲ ಅವರೆಲ್ಲರನ್ನು ಕೈ ಹಿಡಿದ ಈ ತಾಯಿ ನನಗ್ಯಾಕೆ ಹೀಗೆ ಮಾಡಿದಳು. ನಾನೆನು ಅವಳನ್ನ ಬಂಗಾರ ಕೇಳಿದ್ನ, ಸುಖದ ಸುಪ್ಪತ್ತಿಗೆ ಕೇಳಿದ್ನ , ಎರ್ಅಡು ಹೋತ್ತು ಗಂಜಿ ಇದ್ದರೆ ಸಾಕು ಎಂದವನು. ನಾನು ಉಂಡು ಉಳಿದದನ್ನ ಎಲ್ಲರಿಗೂ ಹಂಚಿದವನು ಹೀಗಿದ್ದರು ನನಗೆ ಈ ಬಾಳು.
ಹಾಗೆ ಕಣ್ಣಿತ್ತಿ ಬಡಕಲಾಲಿ, ಮೂಳೆ ಮುದ್ದೆಗಳಂತೆ ಆಗಿದ್ದ ಎತ್ತುಗಳ ಮೇಲೆ ಕೈಯಾಡಿಸಿ , ನಿಮ್ಮನ್ನ ಸಾಕೊ ಯ್ಯೊಗ್ಯತೆ ಕೊಡ ಇಲ್ಲ ನನ್ಗೆ. ಹೋದ ಸಲ ಸಂಕ್ರತಿ ಜಾತ್ರೆನಾಗಾದ್ರು ಕೊಟ್ಟಿದ್ದರೆ ಎಲ್ಲೊ ಚನ್ನಾಗಿ ಬದುಕೊತಿದ್ವು, ನನ್ನ ಹತ್ರ ಮಡಿಕಂಡು ಸಾಯೊ ಸ್ಥಿತಿ ಬಂದ್ವಲ್ಲಾ.
ನೋಡು ನೋಡುತ್ತಲ್ಲೆ ಮೋಡಗಳು ಮರೆಯಾಗಿ ಶುಬ್ರ ಆಕಾಶವಾಗಿ ,ಸೂರ್ಯನ ಪ್ರಕರ ಕಿರಣಗಳು ನೆಲವನ್ನ ನಾಟುತಿದ್ದವು.ಆ ರೌದ್ರ ಕಿರಣಗಳ ತಾಳಲಾಗದೆ ಭೂಮಿ ತೋಳಲಾಡುತಿದ್ದಂತೆ ಭಾಸವಾಗುತ್ತಿತ್ತು. ಒಮ್ಮೆ ಮನೆಯಲ್ಲಿ ಹಾಸಿಗೆ ಹಿಡಿದು ಮಲಗಿದ್ದ ಅಮ್ಮನ ನೆನಪಾಗಿ. ಅವಳಾದರು ಸಸಿಯಾಗಿದ್ದಿದರೆ ಮನಸ್ಸಿಗಾದರು ಒಂದು ಸಮಾಧಾನ ವಾಗ್ತಿತ್ತು. ಎಲ್ಲೊ ಕೂಲಿ ನಾಲಿ ಮಾಡಿ ಎರಡೊತ್ತು ಗಂಜಿನಾದ್ರು ಹುಟ್ಟಿಸ ಬಹುದಿತ್ತು. ಅದ್ಯಾವ ಕಾಯಿಲೆನೊ ಎನೊ, ಎಲ್ಲ ಮದ್ದು ಮಾಡ್ಸಿದ್ದಾಯ್ತು,ಕೊನೆಗೆ ನಾನಿನ್ನು ಬದುಕಿ ಏನು ಮಾಡ್ಬೆಕು ಮಗ ಹೀಗೆ ಇರ್ತಿನಿ. ಸಿವ ಕರಕಂಡಾಗ ಹೋಯ್ತಿನಿ , ನೀನು ಬೇಸರ ಮಾಡ್ಕಬ್ಯಾಡ . ನನ್ನ ಹಣಿನಾಗ ಬರದಂಗೆ ಆಯ್ಯತ್ತದೆ ಅಂದಿದ್ದಳು. ಎಷ್ಟಾದರು ತಾಯಿ ಅಲ್ವಾ ಅವಳಿಗಿರೊ ಶಕ್ತಿ ಮತ್ಯಾರಿಗಿರುತ್ತೆ . ಅವಳಲ್ಲದೆ ಮತ್ಯಾರು ಈ ಮಾತನ್ನು ಆಡಿಯಾರು……………..?
ಇಷ್ಟೆಲ್ಲ ಬರೆದ ಮೇಲೆ ನನ್ನ ಮನಸ್ಸಿಗೆ ಬಂದ ಸಾಳುಗಳು ಇವು….
“ಬದುಕು ಮಾಯೆಯ ಮಾಟ ಮಾತು ನೊರೆ ತೆರೆಯಾಟ
ಜೀವ ಮೌನದ ತುಂಬ ತುಂಬ ಮುನ್ನೀರು ”
ಇದನ್ನ ನಮ್ಮ ಬೇಂದ್ರೆ ಅಜ್ಜ ಯಾಕೆ ಬರೆದರೆ ನನಗಂತು ಗೋತ್ತಿಲ್ಲ ….ನಿನಸಿಕೊಂಡರೆ ಮೈ ಜುಮ್ ಎನ್ನುತ್ತಿದೆ………
amar sir…halli raithana baduku bavanegalanna manassige naatuvante chitrisiddiri…anna haakuva raithana golu novu nalivanna nimma shabdadalli sere hidiyiri …..tumba chennagide …..[:)]
amar,
haLLiya badukanna, kannige katto hage chitrisiddeera, nojakkoo chennagide. aa chitra aayke kooda aste!
AMar tumba chennagi moodibandide. malenadalle hutti belada nanage totagalu pricita. hola-gaddegalu neerininda tumbi mulugi halagi hogive anta raitaru matadodanna kelidde, idu innondu thara neerillade kangettiruva raitana kathe good work carry on my best wishes always with u.
amar, its nice very very ver…….y nice.
halliya badukannu chitrisida bageya bagge helalasaadhyavaagutide nanage.
yellara manasannu muttuva reetiya ee baravanige nanage tumbaane ishtavaayitu.